ಜುಲೈ 27ರಂದು ಬೆಂಗಳೂರು ಬಂದ್ ಇಲ್ಲ – ಕರುನಾಡ ನ್ಯೂಸ್


ಜುಲೈ 27ರಂದು ಬೆಂಗಳೂರು ಬಂದ್ ಇರಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ‌ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಶಕ್ತಿ ಯೋಜನೆ ಪರಿಣಾಮವಾಗಿ ಜುಲೈ 27ರಂದು ಬೆಂಗಳೂರು ಬಂದ್ ಕರೆ ನೀಡಿದ್ದ ವಿವಿಧ ಸಾರಿಗೆ ಸಂಘಟನೆಗಳ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ ಸಿಎಂ ಜೊತೆಯೂ ಮಾತಾಡಿಸಲಿದ್ದೇನೆ. ಬರುವ ಸೋಮವಾರ ಆಟೋ, ಕ್ಯಾಬ್, ಖಾಸಗಿ ಬಸ್ ಮುಖಂಡರ ಜೊತೆ ಸಭೆ ನಡೆಸಲಿದ್ದೇನೆ. ಅಧಿಕಾರಿಗಳ‌ ಜೊತೆಗೆ ಮಾತಾಡಿ ಸೂಚನೆ ನೀಡಿದ್ದೇನೆ ಎಂದು 35 ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿದ್ದೇನೆ ಸಾರಿಗೆ ಸಚಿವ ರಾಮಲಿಂಗ‌ ರೆಡ್ಡಿ ತಿಳಿಸಿದ್ದಾರೆ.  ಈ ಕುರಿತು ಹೇಳಿಕೆ ನೀಡಿರುವ ಖಾಸಗಿ ಬಸ್ ಸಂಘಟನೆ ಅಧ್ಯಕ್ಷ ನಟರಾಜ್ ಶರ್ಮ, “ನಮ್ಮ ಪ್ರಮುಖ ಬೇಡಿಕೆ ಈಡೇರಿಕೆಗೆ ಸಚಿವರು ಭರವಸೆ ನೀಡಿದ್ದಾರೆ. 28 ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆಗಸ್ಟ್ 10ರವರೆಗೆ ಸಚಿವರು ಸಮಯ ಕೇಳಿದ್ದಾರೆ. ಹೀಗಾಗಿ ಜುಲೈ 27ರಂದು ಬೆಂಗಳೂರು ಬಂದ್ ಇರಲ್ಲ” ಎಂದು ತಿಳಿಸಿದ್ದಾರೆ.   ಹೀಗಾಗಿ ಜುಲೈ 27 ರಂದು ಬೆಂಗಳೂರಿನಲ್ಲಿ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಬಂದ್ ಆಗುವುದಿಲ್ಲ ಎಂದು ಖಚಿತಪಟ್ಟಿದೆ.ಈ ಮುನ್ನ ಜುಲೈ 26 ರ ಮಧ್ಯರಾತ್ರಿ 12 ರಿಂದ 27 ರ ಮಧ್ಯರಾತ್ರಿ 12 ರವರೆಗೆ ಜುಲೈ 27 ಕ್ಕೆ ಬೆಂಗಳೂರಿನಲ್ಲಿ ಆಟೋ, ಕ್ಯಾಬ್, ಓಲಾ, ಊಬರ್, ಖಾಸಗಿ ಬಸ್ ಬಂದ್ ಮಾಡುವ ಕುರಿತು ಕರೆ ನೀಡಲಾಗಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ನಂತರ ಆಟೋ ಚಾಲಕರಿಗೆ ಪೆಟ್ಟು ಬಿದ್ದಿತ್ತು, ಹೀಗಾಗಿ ಬೆಂಗಳೂರು ಬಂದ್​ಗೆ ಕರೆ ನೀಡಲಾಗಿತ್ತು. 

The post ಜುಲೈ 27ರಂದು ಬೆಂಗಳೂರು ಬಂದ್ ಇಲ್ಲ appeared first on ಕರುನಾಡ ನ್ಯೂಸ್.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ