ಕಣ್ಣೂರು: ಬಸ್ ಹಾಗೂ ಲಾರಿ‌ ನಡುವೆ ಅಪಘಾತ; ಓರ್ವ ಸಾವು; 24 ಮಂದಿಗೆ ಗಾಯ – ಕರುನಾಡ ನ್ಯೂಸ್


ಕಣ್ಣೂರು(ಜು.11): ಖಾಸಗಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಪ್ರಯಾಣಿಕನೋರ್ವ ಸಾವನ್ನಪ್ಪಿದ ಘಟನೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತೊಟ್ಟಡ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಪತ್ತನಂತಿಟ್ಟಕ್ಕೆ ತೆರಳುತ್ತಿದ್ದ ಕಲ್ಲಡ ಬಸ್ ಹಾಗೂ ಕಣ್ಣೂರಿಗೆ ತೆರಳುತ್ತಿದ್ದ ಸರಕು ಸಾಗಣೆ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ದುರ್ಘಟನೆ ನಡೆದಿದೆ.  ಮಧ್ಯರಾತ್ರಿ ಈ ಘಟನೆ ನಡೆದಿದೆ. ಬಸ್‌ನಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಚಾಲಕ ಲಾರಿಯ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಹೊರತೆಗೆದಿದ್ದಾರೆ. ಗುಡುಗು ಸಿಡಿಲಿನ ರಭಸಕ್ಕೆ ಬಸ್ ಮೂರು ಬಾರಿ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

The post ಕಣ್ಣೂರು: ಬಸ್ ಹಾಗೂ ಲಾರಿ‌ ನಡುವೆ ಅಪಘಾತ; ಓರ್ವ ಸಾವು; 24 ಮಂದಿಗೆ ಗಾಯ appeared first on ಕರುನಾಡ ನ್ಯೂಸ್.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ