ಸುಳ್ಯದ ಲಾಲ್ ಬಹದ್ದೂರ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದಿಂದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ವಿತರಣಾ ಕಾರ್ಯಕ್ರಮ ಅಕ್ಟೊಬರ್ 2 ರಂದು ನಡೆಯಿತು.

ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮತ್ತು ಮಹಾತ್ಮಾ ಗಾಂಧೀಜಿ ಅವರ ಜಯಂತಿ ಪ್ರಯುಕ್ತ, ಈ ಸಂಘಟನೆಯು ರೋಗಿಗಳಿಗೆ ಹಣ್ಣು ಹಂಪಲು ನೀಡಿ ಸತ್ಕರಿಸಿದರು . ಈ ಕಾರ್ಯಕ್ರಮದಲ್ಲಿ ಲಾಲ್ ಬಹದ್ದೂರ ಶಾಸ್ತ್ರಿ ಸಾಂಸ್ಕೃತಿಕ ಕಲಾ ಸಂಘದ ಗೌರವಾಧ್ಯಕ್ಷರಾದ ಶ್ರೀ ಎಂ ವೆಂಕಪ್ಪಗೌಡ , ಅಧ್ಯಕ್ಷರಾದ ಜ್ಯೋತಿಷಿ , ಸಾಹಿತಿ ಎಚ್ .ಭೀಮರಾವ್ ವಾಷ್ಠರ್ , ಹಿರಿಯರಾದ ನಾರಾಯಣ್ ಭಟ್ , ನಂದರಾಜ್ ಸಂಕೇಶ್ , ಮಲ್ಲಿಕಾರ್ಜುನ್ ತೊಡಿಕಾನ , ನಗರ ಪಂಚಾಯತ್ ಸದಸ್ಯರಾದ ಧೀರ ಕ್ರಾಸ್ತಾ , ಅಕ್ಷತ್ ಕ್ರಾಸ್ತಾ , ಯತೀಶ್ , ಸಿದ್ಧಿಕ್ ಹಾಗೂ ಇನ್ನಿತರರು ಹಾಜರಿದ್ದರು