ನಮ್ಮ ಸುಳ್ಯ

ಕೆವಿಜಿ ವೈದ್ಯಕೀಯ ಕಾಲೇಜ್ ಹಾಗೂ ಸ.ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಶಾಂತಿನಗರ ಇದರ ಜಂಟಿ ಆಶ್ರಯದಲ್ಲಿ ಓದುವ ದಿನಾಚರಣೆ; ಮಕ್ಕಳಿಗೂ ಗ್ರಂಥಾಲಯಕ್ಕೂ ಪುಸ್ತಕಗಳ ಕೊಡುಗೆ – ನಮ್ಮ ಸುಳ್ಯ


ದಿನಾಂಕ 19 ಜೂನ್ 2018 ಸೋಮವಾರದಂದು ಕೆವಿಜಿ ವೈದ್ಯಕೀಯ ಕಾಲೇಜ್ ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ಇದರ ಜಂಟಿ ಆಶ್ರಯದಲ್ಲಿ ಓದುವ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾಕ್ಟರ್ ಕೆ ವಿ ಚಿದಾನಂದ ಅಧ್ಯಕ್ಷರು ಅಕಾಡೆಮಿಕ್ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇವರು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಿದ್ಯಾರ್ಥಿಗಳು ಕಥೆ, ಓದುವ ಮಹತ್ವ, ಪುಸ್ತಕದ ಮಹತ್ವ ,ಓದಿ ಹೇಳುವ ಮೂಲಕ ನೆರವೇರಿಸಲಾಯಿತು. ಅಧ್ಯಕ್ಷತೆ ವಹಿಸಿದ ಡಾಕ್ಟರ್ ಕೆ ವಿ ಚಿದಾನಂದ ಗೌಡ ಇವರು ಎಲ್ಲಾ ಮಕ್ಕಳಿಗೂ ಗ್ರಂಥಾಲಯಕ್ಕೂ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಓದಿನ ಮಹತ್ವವನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಕೆವಿಜಿ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಶ್ರೀಮತಿ ಡಾಕ್ಟರ್ ನವ್ಯ ಹಾಗೂ ವೈದ್ಯಕೀಯ ಕಾಲೇಜಿನ ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶ್ರೀಮತಿ ತುಳಸಿ ಕೆ ಮುಖ್ಯೋಪಾಧ್ಯಾಯರು ಶಾಂತಿನಗರ ಶಾಲೆ ಇವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿ ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ರಘುನಾಥ ಯು ಇವರು ಸರ್ವರಿಗೂ ಧನ್ಯವಾದ ಇತ್ತರು. ಶ್ರೀಮತಿ ಪವಿತ್ರ ಇವರು ಕಾರ್ಯಕ್ರಮ ನಿರೂಪಿಸಿದರು.

The post ಕೆವಿಜಿ ವೈದ್ಯಕೀಯ ಕಾಲೇಜ್ ಹಾಗೂ ಸ.ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಶಾಂತಿನಗರ ಇದರ ಜಂಟಿ ಆಶ್ರಯದಲ್ಲಿ ಓದುವ ದಿನಾಚರಣೆ; ಮಕ್ಕಳಿಗೂ ಗ್ರಂಥಾಲಯಕ್ಕೂ ಪುಸ್ತಕಗಳ ಕೊಡುಗೆ appeared first on ನಮ್ಮ ಸುಳ್ಯ.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ