ಸುಳ್ಯ: ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಹಾಗೂ ಕಾರ್ಯಕರ್ತರಿಂದ ಮೇ.4 ರಂದು ಸುಳ್ಯ ನಗರದುದ್ದಕ್ಕೂ ರೋಡ್ ಶೋ ನಡೆಸಲಾಯಿತು.

ಪೈಚಾರ್ ನಿಂದ ಹೊರಟ ರೋಡ್ ಶೋ ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧಿನಗರ ತನಕ ಚುನಾವಣಾ ಪ್ರಚಾರ ನಡೆಸಿದರು.ಈ ಸಂಧರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್, ಜಲ್ಲಾಧ್ಯಕ್ಷ ಅಶೋಕ್ ಎಡಮಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪುಚ್ಚಪ್ಪಾಡಿ, ಮೈಕೆಲ್ ಡಿಸೋಜ ಮುಖಂಡರಾದ ರಶೀದ್ ಜಟ್ಟಿಪಳ್ಳ, ಖಲಂದರ್ ಎಲಿಮಲೆ, ಗುರು ಪ್ರಸಾದ್ ಮೇರ್ಕಜೆ, ರಾಮಕೃಷ್ಣ ಬೀರಮಂಗಲ, ಶಾಫಿ ಹಳೆಗೇಟು, ಸಂಶುದ್ದೀನ್ ಕೆ.ಎಂ, ಸುರೇಶ್ ಮುಂಡಕಜೆ, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.