ಆಮ್ ಆದ್ಮಿ ಪಾರ್ಟಿ ವತಿಯಿಂದ ಮನೆ-ಮನೆ ಭೇಟಿ ಬೀದಿ ಸಭೆ; ಹಲವರು ಪಕ್ಷಕ್ಕೆ ಸೇರ್ಪಡೆ

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ (BA, MBA) ಚುನಾವಣಾ ಪ್ರಚಾರ ಮನೆ-ಮನೆ ಭೇಟಿ ಕಾರ್ಯಕ್ರಮ ಹಾಗೂ ಅಲಂಗಾರು, ಕೊಯಿಲ, ಕುಂತೂರು ಹಾಗೂ ಪೆರಾಬೆ ಪ್ರದೇಶದಲ್ಲಿ ನಡೆಸಲಾಯಿತು‌. ಬೀದಿ ಸಭೆಯಲ್ಲಿ ಸುಮನಾ ಬೆಳ್ಳಾರ್ಕರ್ , ಜಿಲ್ಲಾಧ್ಯಕ್ಷರಾದ ಅಶೋಕ ಎಡಮಲೆ, ಪ್ರಚಾರ ಸಮಿತಿ ಅಧ್ಯಕ್ಷ ರಶೀದ್ ಜಟ್ಟಿಪಳ್ಳ ಮತಯಾಚಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸುಂದರ ಪೂಜಾರಿ ಆಲಂಗಾರು, ಆನಂದ ಗೌಡ ರಾಮಕುಂಜ, ಕಲಂದರ್ ಎಲಿಮಲೆ, ಗುರುಪ್ರಸಾದ್ ಮೇರ್ಕಜೆ, ಇಸ್ಮಾಯಿಲ್ ಕೊಯಿಲ, ರಾಮಕೃಷ್ಣ ಬೀರಮಂಗಲ, ಯಾಕೂಬ್ ಕೋಯಿಲ, ಸತ್ತಾರ್ ಅಜ್ಜಾವರ, ಗೋಪಾಲ್ ಇರಂತಮಜಲು, ಕಲಂದರ್ ಶಾಫಿ, ಸುರೇಶ್ ಮುಂಡಕಜೆ, ಸಂಶುದ್ದೀನ್ ಕೆಎಂ, ವಸಂತ ಬೆಳ್ಳಾರೆ, ಸಿಂಚನ ಬೆಳ್ಳಾರೆ ಹಾಗೂ ಹಲವಾರು ಕಾರ್ಯಕರ್ತರು ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಹಲವಾರು ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ